ಅಂದು ದರ್ಶನ್ ಸರ್ ಇಲ್ಲದೆ ಹೋಗಿದ್ರೆ ನಾನು ಇವತ್ತಿಗೂ ಆಟೊ ಡ್ರೈವರ್ ಆಗೇ ಇರ್ತಿದ್ದೆ ಖ್ಯಾತ ನಿರ್ದೇಶಕ

ಅಸಿಸ್ಟೆಂಟ್​ ಸ್ಟಂಟ್​ ಮಾಸ್ಟರ್​ ಆಗಿ ಕನ್ನಡ ಚಿತ್ರರಂಗಕ್ಕೆ ಅಚಾನಕ್​ ಎಂಟ್ರಿ ಕೊಟ್ಟ ರವಿವರ್ಮಾಗೆ ಇಂಡಿಪೆಂಡೆಂಟ್​​ ಸ್ಟಂಟ್​ ಮಾಸ್ಟರ್​ ಆಗಿ ಬ್ರೇಕ್​ ನೀಡಿದ್ದೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ಧರ್ಮ ಸಿನಿಮಾ.

2004ರಲ್ಲಿ ತೆರೆ ಕಂಡ ಈ ಸಿನಿಮಾ ರವಿವರ್ಮಾ ಬದುಕಿನ ದಿಕ್ಕನ್ನೇ ಬದಲಿಸಿತ್ತು. ದರ್ಶನ್​ರಿಂದ ಈ ಆಫರ್​ ಬರದೇ ಹೋಗಿದ್ದಲ್ಲಿ, ಚಿತ್ರರಂಗಕ್ಕೂ ಬರುವ ಮೊದಲು ಆಟೋ ಓಡಿಸುತ್ತಿದ್ದ ರವಿವರ್ಮಾ ಮತ್ತೆ ರಾತ್ರಿ ಆಟೋ ಓಡಿಸಬೇಕು ಅಂತ ಫಿಕ್ಸ್​ ಆಗಿದ್ದರು. ಅದೇ ಸಮಯಕ್ಕೆ ಆಫರ್​ ಕೊಟ್ಟ ದರ್ಶನ್​ ಅವರನ್ನ ರವಿವರ್ಮಾ ನೆನಪಿಸಿಕೊಂಡಿದ್ದಾರೆ. ದರ್ಶನ್​ ತಮಗೆ ಗಾಡ್​ ಫಾದರ್​ ಅಂತಾರೆ ರವಿವರ್ಮಾ. ಇನ್ನು ಅದೆಷ್ಟೋ ಬಾರಿ ತೆಲುಗು ಸಿನಿಮಾಗಳಿಗೆ ಸ್ಟಂಟ್​ ಕೊರಿಯೋಗ್ರಾಫಿ ಮಾಡಲು ಅವಕಾಶ ಸಿಕ್ಕಾಗಲೂ, ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡ್ತಿದ್ದ ಕಾರಣ ತೆಲುಗಿನಿಂದ ದೂರ ಉಳಿದಿದ್ದರು. ಸದ್ಯ ರವಿವರ್ಮಾ, ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿಯಲ್ಲೂ ಬೇಡಿಕೆಯ ಸ್ಟಂಟ್​ ಮಾಸ್ಟರ್​ ಆಗಿದ್ದಾರೆ. ‘ಒಂದು ಚಾಲೆಂಜ್​ ಮಾತ್ರ ಇತ್ತು. ಇಲ್ಲಿ ಬೇರೆ ಭಾಷೆಗಳಿಂದ ಸ್ಟಂಟ್​ ಮಾಸ್ಟರ್​ಗಳನ್ನ ಕರೆಸಿಕೊಳ್ತಿದ್ರು. ಇಲ್ಲಿಯವರ ಮೇಲೆ ಯಾಕೆ ನಮ್ಮವರಿಗೆ ನಂಬಿಕೆ ಇಲ್ಲ ಅನಿಸ್ತಿತ್ತು. ನಾನು ಕೆಲಸ ಮಾಡಿದ ಎಲ್ಲಾ ಸಿನಿಮಾಗಳ ವಿಡಿಯೋ ಮಾಡಿ ಒಂದು ಸಿಡಿಯಲ್ಲಿ ಹಾಕಿ, ಹೈದರಾಬಾದ್​ನಲ್ಲಿ ಎರಡು ವರ್ಷ ಎಲ್ಲಾ ಕಡೆ ಸುತ್ತಾಡಿದ್ದೀನಿ, ಅದೂ ಅಲ್ಲಿ ಅವಕಾಶಕ್ಕಾಗಿ. ಈ ಮಧ್ಯೆ ಒಂದು ತೆಲುಗು ಸಿನಿಮಾ ಆಫರ್​ ಬಂದಾಗ ನಾನು ಸಂಗೊಳ್ಳಿರಾಯಣ್ಣ ಸಿನಿಮಾ ಮಾಡ್ತಿದ್ದೆ, ಸೋ ಹೋಗಿಲ್ಲ. ಮತ್ತೆ ಹುಡುಗರು ಸಿನಿಮಾ ಮಾಡ್ತಿದ್ದಾಗ ಮತ್ತೊಂದು ತೆಲುಗು ಸಿನಿಮಾಗೆ ಕರೆದ್ರು, ಆಗಲೂ ಹೋಗಿಲ್ಲ. ಕೊನೆಗೆ ತೆಲುಗಿನಲ್ಲಿ ಸಿಕ್ಕಿದ್ದು ಮಹಾತ್ಮ ಸಿನಿಮಾ’ ಅಂತ ಮಾತನಾಡುತ್ತಾ ರವಿವರ್ಮಾ ಹಂಚಿಕೊಂಡಿದ್ದಾರೆ.