ರೋಹಿಣಿ ಸಿಂಧೂರಿ ಈ ಹೆಸರು ಕೇಳಿದರೆ ನೆನಪಾಗುವ ಒಂದೆರಡು ಪದಗಳು ಧೈರ್ಯ ಮತ್ತು ಶ್ರದ್ಧೆ. ಇಂದಿನ ಪೀಳಿಗೆಯ ಯುವತಿಯರಿಗೆ ಮಾದರಿ ರೋಹಿಣಿ ಸಿಂಧೂರಿ ಅವರು. ಮೈಸೂರಿಗೆ ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು. ಚಿಕ್ಕ ವಯಸ್ಸಿಗೆ ಕೆಲಸದ ಮೇಲೆ ಇವರಿಗೆ ಇರುವಷ್ಟು ಶ್ರದ್ದಾ ಭಕ್ತಿ, ಜನರಿಗೆ ಸೇವೆ ಮಾಡುವ ಮನೋಭಾವ ಮೆಚ್ಚುವಂಥದ್ದು. ಅದೆಷ್ಟೋ ರಾಜಕಾರಣಿಗಳಿಂದ ಸಾಧ್ಯವಾಗದ ಕೆಲಸಗಳನ್ನು ಮಾಡಿರುವ ದಿಟ್ಟ ಮಹಿಳೆ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ. ರೋಹಿಣಿ ಸಿಂಧೂರಿ ಅವರು ಆಂಧ್ರ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದರು ಸಹ, ಕರ್ನಾಟಕದಲ್ಲಿ ಕೆಲಸ ಶುರು ಮಾಡಿದ ನಂತರ ಕನ್ನಡ ಕಲಿತು ಸ್ವಚ್ಛವಾಗಿ ಕನ್ನಡ ಮಾತನಾಡುವುದನ್ನು ನೋಡಿದರೆ ಸಂತೋಷ ಆಗುತ್ತದೆ.

ಆದರೆ ಹಲವಾರು ಕಾರಣಗಳಿಂದ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ಬೆಂಗಳೂರಿಗೆ
ವರ್ಗಾವಣೆ ಮಾಡಲಾಯಿತು. ಇದೀಗ ಸೋಷಿಯಲ್ ಮೀಡಿಯದಲ್ಲಿ ಬ್ರಿಂಗ್ ಬ್ಯಾಕ್ ರೋಹಿಣಿ
ಸಿಂಧೂರಿ ಎನ್ನುವ ಕ್ಯಾಂಪೇನ್ ಸಹ ನಡೆಯುತ್ತಿದೆ. ನಿಮಗೆ ಗೊತ್ತಿರೋ ಹಾಗೆ ಇತ್ತೀಚಿಗೆ
ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿತ್ತು. ಇದರ ಬಗ್ಗೆ
ಸಾಕಷ್ಟು ಚರ್ಚೆ ಆಗಿದ್ದವು. ಮೈಸೂರಿನಲ್ಲಿ ಈಗ ರೋಹಿಣಿ ಸಿಂಧೂರಿ ಅವರ ಜಾಗಕ್ಕೆ
ಬೇರೊಬ್ಬರನ್ನು ಕರೆತರಲಾಗಿದೆ. ಇದರ ಬಗ್ಗೆ ಕರ್ನಾಟಕಕ್ಕೆ ಸರ್ಕಾರದ ವಿರುದ್ಧ ಸಾಕಷ್ಟು
ಜನ ಗರಂ ಆಗಿದ್ದಾರೆ. ದಿಟ್ಟ ಜಿಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಪರೂಪದ ಫೋಟೋಗಳನ್ನು,
ಕಾಲೇಜು ದಿನಗಳ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು.
ರೋಹಿಣಿ ಸಿಂಧೂರಿ ಅವರು ಮೂಲತಃ ಅಂದ್ರ ಪ್ರದೇಶದವರು. ಯು ಪಿ ಸ್ ಸಿ ಪರೀಕ್ಷೆಯಲ್ಲಿ
ಅತ್ಯದ್ಭುತ ಸಾಧನೆ ಮಾಡಿದ್ದ ರೋಹಿಣಿ ಸಿಂಧೂರಿ ಅವರು, ಒಳ್ಳೆಯ ರಾಂಕ್ ಪಡೆದರು. ಆ ನಂತರ
ಕರ್ನಾಟಕದಲ್ಲಿ ಮಂಡ್ಯ, ಹಾಸನ ನಂತರ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ,
ಸಾಕಷ್ಟು ಒಳ್ಳೆಯ ಕೆಲಸ ಮಾಡಿ ಜನರ ಕೈಯಲ್ಲಿ ಸೈ ಎನಿಸಿಕೊಂಡಿದ್ದರು. ಇಂತಹ ಒಳ್ಳೆಯ
ಜಿಲ್ಲಾಧಿಕಾರಿಯನ್ನು ಉಳಿಸಿಕೊಳ್ಳುವ ತಾಕತ್ತು ನಮ್ಮ ರಾಜ್ಯ ಸರ್ಕಾರಕ್ಕೆ ಇಲ್ಲ ಎಂಬುದು
ಬೇಸರದ ಸಂಗತಿ.