ಮೇಘನಾ ರಾಜ್ 3 ವರ್ಷದ ಬಳಿಕ ಕೊಟ್ಟ ಸಿಹಿಸುದ್ದಿ ? ನಿಮ್ಮೆಲ್ಲರ ಮನೆಗೆ ಬರಲಿದ್ದಾರೆ!

 

ಕನ್ನಡ ಚಿತ್ರರಂಗದಲ್ಲಿ ತನ್ನ ಮುದ್ದಾದ ನಗು ಹಾಗೂ ಮೊಗದಿಂದ ಅನೇಕ ಅಭಿಮಾನಿಗಳನ್ನು ಪಡೆದ ನಟಿ ಅಂದರೆ ಅದು ಮೇಘನಾ ರಾಜ್. ಒಂದು ರೀತಿಯಲ್ಲಿ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ಮನೆ ಮಗಳು ಅಂದರೂ ತಪ್ಪಾಗಲ್ಲ. ಹಿರಿಯ ನಟ ಸುಂದರರಾಜ್ ಹಾಗೂ ಪ್ರಮೀಳಾ ಜೋಶಾಯ್ ಅವರ ಮಗಳಾದ ಮೇಘನಾ ರಾಜ್, ಮೂಲತಃ ರಂಗಭೂಮಿ ಕಲಾವಿದೆ. ಇವರು ಮೊದಲು ನಟಿಸಿದ್ದು ತೆಲುಗಿನ ಬೆಂಡು ಅಪ್ಪರಾವ್ ಆರ್ ಎಂ ಪಿ ಚಿತ್ರದಲ್ಲಿ. ಆದರೆ ಅದು ತೆರೆ ಕಂಡಿರಲಿಲ್ಲ. ನಂತರ ಕಾಮಿಡಿ ಎಂಟರ್ ಟೈನರ್ ಚಿತ್ರದಲ್ಲಿ ಶಿಕ್ಷಕಿಯಾಗಿ ನಟಿಸಿದ್ದರು.

ಇವರು ನಟಿಸಿದ ಮೊದಲ ಕನ್ನಡ ಚಿತ್ರ ಪುಂಡ. ನಂತರ ತೆಲುಗು, ಮಲಯಾಳಂನಲ್ಲಿಯೇ ಹೆಚ್ಚಾಗಿ ನಟಿಸಿದ್ದ ಮೇಘನಾ, ರಾಜಾ ಹುಲಿ ಚಿತ್ರ ಮೂಲಕ ಮತ್ತೆ ಕನ್ನಡಕ್ಕೆ ಕಂ ಬ್ಯಾಕ್ ಮಾಡಿದ್ದರು. ಇನ್ನು ಮೇಘನಾ ರಾಜ್ ಅವರು ನಟ ಚಿರಂಜೀವಿ ಸರ್ಜಾರದ್ದು ಬಾಲ್ಯದ ಪ್ರೀತಿ. ಹತ್ತು ವರ್ಷದಿಂದ ಪ್ರೀತಿಸಿ ನಂತರ ಮದುವೆ ಆಗಿದ್ದರು. ಆದರೆ ಮೇಘನಾ ರಾಜ್ ಅವರು 5 ತಿಂಗಳ ಗರ್ಭಿಣಿಯಾಗಿರುವಾಗ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದರು.

ಆ ನಂತರದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮೇಘನಾ, ರಾಯನ್ ಸರ್ಜಾ ಹುಟ್ಟಿದ ನಂತರ ಮತ್ತೆ ಹೊಸ ಜೀವನವನ್ನು ಆರಂಭಿಸಿ, ಮಗನೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಆ ನಂತರದಿಂದ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿದ್ದ ಮೇಘನಾ ರಾಜ್, ತನ್ನ ಮಗನ ಮುದ್ದಾದ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಮೇಘನಾ ಅವರು ಕಳೆದ ಬಾರಿ ಮತ್ತೆ ಬಣ್ಣ ಹಚ್ಚುವುದಾಗಿ ಸಿಹಿ ಸುದ್ದಿ ಕೊಟ್ಟಿದ್ದರು.

ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮೊದಲ ಚಿತ್ರೀಕರಣ ಎಂದು ಹೇಳಿ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದರು, ಅಷ್ಟೆ ಅಲ್ಲ, ತಾನು ಮೇಕಪ್ ಹಚ್ಚಿಕೊಳ್ಳುತ್ತಿರುವ ವಿಡಿಯೋ ಕೂಡ ಶೇರ್ ಮಾಡಿದ್ದರು. ಇದೆಲ್ಲಾ ಅವರ ಅಭಿಮಾನಿಗಳಿಗೆ ತೀವ್ರ ಗೊಂದಲ ಸೃಷ್ಟಿಸಿತ್ತು. ಆದರೆ ಇದೀಗ ಆ ಪ್ರಶ್ನೆ ಗೊಂದಲಕ್ಕೆಲ್ಲಾ ತೆರೆ ಬಿದ್ದಿದ್ದು, ಮೇಘನಾ ರಾಜ್ ಅವರು ಇನ್ನು ಮುಂದೆ ಪ್ರತಿವಾರ ನಿಮ್ಮ ಮನೆಗೆ ಬರಲಿದ್ದಾರೆ.

ಹೌದು, ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋ ಆದ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ತೀರ್ಪುಗಾರ್ತಿಯಾಗಿ ಆಗಮಿಸಲಿದ್ದಾರೆ. ಹೀಗೆ ಮೊದಲ ಬಾರಿ ಡ್ಯಾನ್ಸಿಂಗ್ ಶೋನಲ್ಲಿ ಜಡ್ಜ್ ಆಗಿ ನಿಮ್ಮ ಮುಂದೆ ಬರಲಿದ್ದು, ಇವರಿಗೆ ವಿಜಯ್ ರಾಘವೇಂದ್ರ ಹಾಗೂ ಮಯೂರಿ ಕೂಡ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.